ಮೈಸೂರು :: ರಾಜ್ಯ ಮಟ್ಟದಲ್ಲಿ ನೂತನವಾಗಿ ಅಸ್ಥಿತ್ವಕ್ಕೆ ತಂದಿರುವ *ಕರ್ನಾಟಕ ದಮನಿತ ಸಮಾಜಗಳ ವೇದಿಕೆ* ಗೆ ರಾಜ್ಯಾಧ್ಯಕ್ಷರನ್ನಾಗಿ ದೇವರಾಜ ಟಿ ಕಾಟೂರ ಆಯ್ಕೆಯಾಗಿದು ಶ್ರೀ ಮಹರ್ಷಿ ವಾಲ್ಮೀಕಿ ನಾಯಕ ಚಾರಿಟಬಲ್ ಟ್ರಸ್ಟ್ ( ರಿ) ವತಿಯಿಂದ ಆಡಳಿತ ಮಂಡಳಿಯ ಎಲ್ಲಾ ಸದಸ್ಯರು ಸಂಘದ ಕಾರ್ಯಾಲಯದಲ್ಲಿ ಗೌರವ ಸನ್ಮಾನ ಮಾಡಿ ಅಭಿನಂದಿಸಿದರು
ಈ ಸಂದರ್ಭದಲ್ಲಿ ಮಾಜಿ ವಿಧಾನ ಪರಿಷತ್ ಸದಸ್ಯರು ಮತ್ತು ಗೌರವ ಸಲಹೆಗಾರರಾದ *ಶ್ರೀ ಸಿದ್ದರಾಜು*, ಟ್ರಸ್ಟ್ ಅಧ್ಯಕ್ಷರಾದ ನಿವೃತ್ತ ಡಿಸಿಪಿ ಶ್ರೀ ಬಿ.ಶಿವಣ್ಣ, ಖಜಾಂಚಿ ಶ್ರೀ ಸುರೇಶ್ ಬಾಬು ,ಟ್ರಸ್ಟಿಗಳಾದ ಹೆಚ್.ಡಿ.ಕೋಟೆ ಶ್ರೀ ಎಂ.ಸಿ.ದೊಡ್ಡನಾಯಕ,ಪರಿಶಿಷ್ಟ ಪಂಗಡಗಳ ನೌಕರರ ಸಂಘದ ರಾಜ್ಯಾಧ್ಯಕ್ಷರಾದ ಶ್ರೀ ಇಂಜಿನಿಯರ್ ಜಗದೀಶ್ವರಮೂರ್ತಿ,ಶ್ರೀ ಗಣೇಶಮೂರ್ತಿ, ಕೆ.ಆರ್.ಪೇಟೆ ಶ್ರೀ ರಾಜನಾಯಕ,ಚಾಮರಾಜನಗರ ಶ್ರೀ ಜಯಸುಂದರ್,ಶ್ರೀ ರಮ್ಮನಹಳ್ಳಿ ರಾಜಶೇಖರ್,ಪಿರಿಯಾಪಟ್ಟಣ ಎನ್.ಹರೀಶ್ ತುಂಗ ಸಮಾಜ ಹಿರಿಯ ಮುಖಂಡರು ಮತ್ತು ಸಮಾಜದ ಬಂದುಗಳು ಹಾಜರಿದ್ದರು.

