KRGRV
Monday, March 23, 2026
Homeಜಿಲ್ಲಾ ಸುದ್ದಿಗಳುನಾಗಶೆಟ್ಟಹಳ್ಳಿಯಲ್ಲಿ ವಿವಾದದ ನಡುವೆಯೂ ನಡೆದ ಬಸವೇಶ್ವರ ಸ್ವಾಮಿ ಜಾತ್ರೆ; ಊರ ಹೊರಗೆ ಉತ್ಸವ, ದೇಗುಲದಲ್ಲಿ ದಲಿತರಿಂದ...

ನಾಗಶೆಟ್ಟಹಳ್ಳಿಯಲ್ಲಿ ವಿವಾದದ ನಡುವೆಯೂ ನಡೆದ ಬಸವೇಶ್ವರ ಸ್ವಾಮಿ ಜಾತ್ರೆ; ಊರ ಹೊರಗೆ ಉತ್ಸವ, ದೇಗುಲದಲ್ಲಿ ದಲಿತರಿಂದ ಪೂಜೆ

ಮಾಗಡಿ: ತಾಲ್ಲೂಕಿನ ಕಸಬಾ ಹೋಬಳಿಯ ನಾಗಶೆಟ್ಟಹಳ್ಳಿ ಗ್ರಾಮದಲ್ಲಿ ಹಲವು ವರ್ಷಗಳ ಜಾಗದ ವಿವಾದದ ನಡುವೆಯೂ ಶ್ರೀ ಬಸವೇಶ್ವರ ಸ್ವಾಮಿ ಜಾತ್ರಾ ಮಹೋತ್ಸವ ಜರುಗಿತು.

ಗ್ರಾಮದ ಬಸವೇಶ್ವರ ಸ್ವಾಮಿ ದೇವಸ್ಥಾನದ ಉದ್ಯಾನವನದ ಜಾಗದಲ್ಲಿ ಅಂಬೇಡ್ಕರ್ ಭವನ ನಿರ್ಮಿಸಬೇಕೆಂದು ದಲಿತ ಸಮುದಾಯದವರು ಕಳೆದ ಹಲವು ವರ್ಷಗಳಿಂದ ಒತ್ತಾಯಿಸುತ್ತಾ ಬಂದಿದ್ದಾರೆ. ಈ ವಿಚಾರವಾಗಿ ಗ್ರಾಮದಲ್ಲಿ ಭಿನ್ನಾಭಿಪ್ರಾಯಗಳಿದ್ದು, ಈ ಬಾರಿಯ ಜಾತ್ರಾ ಮಹೋತ್ಸವಕ್ಕೂ ಇದು ಅಡ್ಡಿಯಾಗಿತ್ತು. ವಿವಾದದ ಹಿನ್ನೆಲೆಯಲ್ಲಿ ಈ ಸಲವೂ ಗ್ರಾಮದ ಒಳಗೆ ಜಾತ್ರೆ ನಡೆಸಲು ಅವಕಾಶ ಸಿಗಲಿಲ್ಲ.

ಆದರೆ, ಪರಂಪರೆಯನ್ನು ಮುಂದುವರಿಸಲು ನಿರ್ಧರಿಸಿದ ಗ್ರಾಮಸ್ಥರು, ಊರಿನ ಹೊರಗಡೆ ಜಾತ್ರಾ ಮಹೋತ್ಸವವನ್ನು ಸಂಭ್ರಮದಿಂದ ಆಚರಿಸಿದರು. ಇತ್ತ ದಲಿತ ಸಮುದಾಯದವರು ದೇವಸ್ಥಾನದ ಒಳಗೆ ತೆರಳಿ ತಾವೇ ಸ್ವತಃ ಪೂಜೆ ಸಲ್ಲಿಸುವ ಮೂಲಕ ಗಮನ ಸೆಳೆದರು. ಹಲವು ವರ್ಷಗಳಿಂದ ನಡೆಯುತ್ತಿರುವ ಈ ಜಾಗದ ವಿವಾದವು ಈ ಬಾರಿಯೂ ಜಾತ್ರೆಯ ಸಂದರ್ಭದಲ್ಲಿ ಪ್ರತಿಧ್ವನಿಸಿದ್ದು, ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕೆ ವಹಿಸಲಾಗಿತ್ತು.

ಹೆಚ್ಚಿನ ಸುದ್ದಿ